ಶ್ರೀ ವೀರಭದ್ರೇಶ್ವರ ಮೂವೀ ಮೇಕರ್ಸ್ ಲಾಂಛನದಲ್ಲಿ ಮಹಾದೇವಪ್ಪ.ಬಿ.ಹಲಗತ್ತಿ ನಿರ್ಮಿಸುತ್ತಿರುವ ನವರಂಗಿ ಚಿತ್ರವು ಡಿಸೆಂಬರ್ ಮೊದಲ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಹೆಚ್ಚಾಗಿ ಹಾಸ್ಯಕಲಾವಿದರೇ ಅಭಿನಯಿಸಿರುವ ಸಂಪೂರ್ಣ ಮನೋರಂಜನಾತ್ಮಕ ಚಿತ್ರವಾಗಿದೆ ನವರಂಗಿ.
ಜಿ.ಉಮೇಶ್, ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ, ಕೆ.ಸಿ.ಉಮೇಶ್ ಛಾಯಗ್ರಹಣ, ವಿ.ಆನಂದ್ ಸಂಭಾಷಣೆ, ವೆಂಕಟ್ ಸಾಹಸ, ಸುರೇಶ್ ಚಂದ್ರಶೇಖರ್ ರೆಡ್ಡಿ ನೃತ್ಯ ನಿರ್ದೇಶನ, ನಾಗೇಂದ್ರ ಅರಸ್ ಸಂಕಲನ, ಆನಂದ್ಪ್ರಿಯ ಸಾಹಿತ್ಯವಿದೆ. ಸಾಧುಕೋಕಿಲ ರವಿಶಂಕರ್, ರೂಪಿಕಾ, ಆಕಾಶ್ ಶೆಟ್ಟಿ, ಮಿಮಿಕ್ರಿ ದಯಾನಂದ್, ಸೌಜನ್ಯ ಎಂ.ಎಸ್. ಉಮೇಶ್, ಮುರಳಿ ಮೋಹನ್, ಚಿಕ್ಕಣ್ಣ, ಕುರಿ ಪ್ರತಾಪ್, ಕಿಲ್ಲರ್ ವೆಂಕಟೇಶ್, ಲಯೇಂದ್ರ ತಾರಾಗಣವಿದೆ.